ನಕ್ಕರೆ ಮನಸ್ಸಿನ ದುಗುಡ ಮಾಯವಾಗುತ್ತದೆ. ನಕ್ಕು ಹಗುರಾಗಿರಿ ಎಂಬ ಮಾತು ಇದನ್ನು ಸೂಚಿಸುತ್ತದೆ. ಮುದುಡಿದ ಮನಸ್ಸಿಗೆ ನಗೆಯಂಥ ಡಿಹಿ ಮದ್ದು ಇನ್ನೊಂದಿಲ್ಲ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ನಗೆ ಗೊಂಚಲು’ ತುಣುಕುಗಳನ್ನು ರಚಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್ ಎನ್ ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸುವಂಥ ಈ ತುಣುಕುಗಳಿಗೆ ಶ್ರೀ ಗುಜ್ಜಾರ್ ಚಿತ್ರ ರಚಿಸಿದ್ದಾರೆ. ಇಅವನ್ನು ಓದುತ್ತ ಹೋದಂತೆ ನಿಮ್ಮ ನಗು ಬರಿಯ ಮುಗುಳಿನಲ್ಲಿ ಮುಗಿದುಹೋಗುವುದಿಲ್ಲ; ಚಟಾರನೆ ಸಿಡಿದು ಅರಳುತ್ತದೆ.