Product Description
ವೇದ ಮಾತೆಯನ್ನು ವರ್ಣಿಸುವ ಶ್ಲೋಕ ಗಚ್ಚಿನ ಮನೆಯ ನವರಂಧ್ರಗಳಿಂದ ಸೋರಿ ಅಷ್ಟದಿಕ್ಕುಗಳಿಗೆ ಪಯಣಿಸತೊಡಗಿದಾಗ ಕೇರಿಯ ಅನೇಕರಿನ್ನೂ ಮಲಗಿಕೊಂಡಿದ್ದರು. ಅವರಲ್ಲಿ ಅನೇಕರಿಗೆ ಅನ್ನದ ಕನಸು: ಹಲವರಿಗೆ ಬಾಡುಬುರ್ರದ ಕನಸು. ಸುತ್ತ ನಾಲ್ಕು ಕಡೆಗಿದ್ದ ತಿಪ್ಪೆಗಳಿಗೆ ಅನಿರೀಕ್ಷೀತ ಬೆಟ್ಟಿ ನೀಡಿ ಇನ್ಸೆಪೆಕ್ಷನ್ ನಡೆಸಿ ಅದೇ ತಾನೆ ಕೋಳಿಗಳು ಆ ವೇದಾಲಾಪನೆ ಕೇಳಿಸಿಕೊಂಡು ಗಚ್ಚಿನ ಮನೆಕಡೆ ಕುತೋಹಲದಿಂದ ನೋಡತೊಡಗಿದವು. ಆ ಪೋಹಿಷ್ಠೇತಿ ನವರೃಸ್ಯ ಸೂಕ್ತಸ್ಯ ಅಂಬರೀಷ ಸಿಂದೂದ್ವೀಪ ಋಷಿಃ ಆಪೋ ದೇವಾತ ಎಂದು ಹೇಳಿ ಬಂದ ದ್ವನಿಯನ್ನು ಅದೇತಾನೆ ಶೌಚೋಪಚಾರ ಮುಗಿಸಿಕೊಂಡು ಬಂದು ಸಂತೃಪ್ತ ಸೂಚಕವಾಗಿ ನಾಲಿಗೆಯನ್ನು ಝಳಪಿಸುತ್ತ ಬಂದ ಅರ್ಜುನ, ಭೀಮ, ರಾಮ ಜರಾಸಂಧವೇ ಮೊದಲಾದ ಶುನಕಾದಿ ಸಜ್ಜನರು ಕೇಳಿಸಿಕೊಂಡು ರೋಮಾಂಚನಗೊಂಡವು. ಕಾರಣ ಕೆಲ ದಿನಗಳ ಹಿಂದೆ ಆರತಿಯನ್ನು ಚುಡಾಯಿಸುವ ಅಂಬರೀಸನ ನಾಗರಹಾವು ಚಿತ್ರದ ಭಿತ್ತಿಚಿತ್ರ ನೋಡಿದ್ದವು.