Select Size
Quantity
Product Description
ಶ್ರೀ ಸಿದ್ದಯ್ಯ ಪುರಾಣಿಕರು ಅರ್ವಾಚೀನ ಶ್ರೀ ಸಾಮಾನ್ಯರಿಗೆ ಪ್ರಾಚೀನ ಸಾಮಾನ್ಯತಾಶ್ರೀಯನ್ನು ಸುಲಭ ಮಧುರ ರೂಪದಲ್ಲಿ ಉಣಬಡಿಸಿದ್ದಾರೆ, ಅವರ 'ಶರಣ ಚರಿತಾಮೃತ'ದಲ್ಲಿ.
ಉತ್ತಮ ವರ್ಗದವರಿಗೆ ಮಾತ್ರ ಮೀಸಲು ಎಂದು ಭ್ರಮಿಸಿದ್ದ ಭಕ್ತಿ, ಜ್ಞಾನ, ಭಗವದನುಭೂತಿ ಮತ್ತು ಆಧ್ಯಾತ್ಮಿಕ ಉನ್ನತಿ ಇವುಗಳಿಗೆ ಸಾಮಾನ್ಯ ಜನರೂ ಕೆಳವೃತ್ತಿಯವರೆಂದೂ ಕೀಳು ಜಾತಿಯವರೆಂದೂ ಮೂಲೆಗೆ ತಳ್ಳಿಸಿಕೊಂಡು ಅನಾಮಧೇಯರೂ ಅಜ್ಞಾತರೂ ಆಗಿ, ದೇವಸ್ಥಾನಗಳಿಗೂ ರಾಜಾಸ್ಥಾನಗಳಿಗೂ ಬಹುದೂರದಲ್ಲಿಯೆ ನಿಂತಿರುತ್ತಿದ್ದವರೂ ಸಾಧಕರಾಗಿ, ಶರಣರಾಗಿ, ಸಿದ್ಧರಾಗಿ ಪರಮ ಶ್ರೇಯಸ್ಸಿನ ಮಹೋನ್ನತ ಶಿಖರಗಳಿಗೆ ಏರಿದ ರೋಮಾಂಚಕ ನಿದರ್ಶನಗಳನ್ನೊಳಗೊಂಡ ಈ ಕಥನ ಕೃತಿ ನಮ್ಮ ಸಾಮಾನ್ಯ ಜನವರ್ಗಕ್ಕೆ ಆಶೆ ಧೈಶ್ಯ ಆತ್ಮಗೌರವಗಳನ್ನು ದಯಪಾಲಿಸಿ, ಅವರನ್ನು ರಾಜಕೀಯ ಪ್ರಜಾಸತ್ತೆಗೆ ಮಾತ್ರವಲ್ಲದೆ ಆಧ್ಯಾತ್ಮಿಕವಾದ ಆತ್ಮಶ್ರೀಯ ಪ್ರಜಾಸತ್ತೆಗೂ ಅಧಿಕಾರಿಗಳನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.
ಶರಣರ ಜೀವನ ಚರಿತ್ರೆಯ ತಾತ್ಪರವನ್ನೂ ಹೃದಯವನ್ನೂ ದರ್ಶನ ಧ್ವನಿಯನ್ನೂ ಗ್ರಹಿಸಿ, ಆಧುನಿಕವಾದ ವೈಜ್ಞಾನಿಕ ದೃಷ್ಟಿಯಿಂದಲೂ ವಿಚಾರಬುದ್ಧಿಯಿಂದಲೂ ಅವರು ಮುಂದುವರಿದರೆ ಸರ್ವಧರ್ಮ ಸಮಾನತೆಯ ಮೇಲೆ ನಿಂತಿರುವ ಭಾರತ ರಾಷ್ಟ್ರಕ್ಕೆ ಶಾಶ್ವತವೂ ಸ್ಥಿರವೂ ಆಗಿರುವ ಅಡಿಪಾಯ ಸಿದ್ಧವಾಗುತ್ತದೆ; ಲೋಕಕ್ಕೂ ಮಾರ್ಗದರ್ಶನವಾಗಬಹುದು.
Width
14 CMS
Height
9 CMS
Length
22 CMS
Weight
900 GMS
ISBN-13
9789385868467
Binding
Hard Bound
Author
Siddayya Puranik
Publication Year
2016
Publisher
Sapna Book House Pvt Ltd
Number of Pages
872
Language
Kannada