Quantity
Product Description
ಈ ಕಾದಂಬರಿಯು ತೆರೆದಿಡುವ ಲೋಕ ಬಹುಕಾಲ ನಮ್ಮ ಮನಸ್ಸನ್ನು ಅಶಾಂತಗೊಳಿಸುತ್ತದೆ. ಗಾಢ ದುಃಖವೊಂದು ಆವರಿಸಿ ಒಲ್ಲೆ ಎಂಬುವವರನ್ನೂ ಬಿಡದೆ ವಿಚಾರದಾಳಕ್ಕೆ ಎಳೆಯುತ್ತದೆ. ಮುರಿದ ದೋಣಿಯನ್ನು ಹೇಗೋ ದುರಸ್ತಿ ಮಾಡಬಹುದು. ಕಡಲೇ ಮುರಿದರೆ?
ಈ ಕಾದಂಬರಿಯ ನಾಯಕ ನಾಯಕಿ ಖಳ ಎಲ್ಲವೂ ಒಂದೇ! ಅದು ಮಾನುಷ ನೀಚತನ. ಇಂತಹ ಮಾನುಷನೀಚತ್ವದ ಒಳಗನ್ನು ನೆಲ, ಕಾಡು, ನೀರು ಈ ಮೂರು ನೆಲೆಗಳಲ್ಲೂ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುತ್ತ ಕಾದಂಬರಿಯು ಬಗೆಯುತ್ತದೆ. ಜೀವಂತ ಮನುಷ್ಯ, ಜೀವಂತ ಪ್ರಾಣಿ, ಜೀವಂತ ವಸ್ತುವನ್ನು ಜೀವವಿರುವಾಗಲೇ ಒಡೆದು ಛಿದ್ರಗೊಳಿಸಿ ಆನಂದಿಸುವ ಮನುಷ್ಯ ಮತ್ತು ಇದು ವಿನಾಶಕಾರಿಯೆಂದು ತಿಳಿದೂ ಮೌನವಾಗಿ ಬೆಂಬಲಿಸುವ ಗುಂಪು ಎರಡೂ ಎಂದೂ ಇರುತ್ತವೆ. ಕೊನೆಗೆ ಉಳಿಯುವ ಸಂಕಟ - ತಮ್ಮ ಪಾಡಿಗೆ ಬದುಕುವ ಬಹುಜನರ ಗುಂಪು ಕೊನೆಗೂ ಒಂದು ಹಿಡಿ ನೀಚರ ಪ್ರತ್ಯಕ್ಷ ಯಾ ಪರೋಕ್ಷ ಅಧೀನದಲ್ಲೇ ಇದ್ದುಬಿಡುತ್ತದೆ ಎಂಬುದು.
ಆ ಚರಿತ್ರೆಯನ್ನೇ ಈ ಕಾದಂಬರಿ ಪ್ರಸ್ತುತದ ಮಾವೋವಾದಿ ಸಶಸ್ತ್ರ ನಕ್ಸಲ್ ಕ್ರಾಂತಿ, ನಿಶ್ಯಬ್ದವಾಗಿ ಜಗತ್ತನ್ನು ಹೀರುತ್ತಿರುವ ಹಿಡಿಯಷ್ಟು ಕಾರ್ಪೊರೇಟ್ ಪಿಪಾಸಿಗಳ ಸಂಚು, ಎಂದೂ ಸ್ವಹಿತದ ಆಚೆಗೆ ಯೋಚಿಸದ ರಾಜಕೀಯ ಈ ಮೂರೂ ಭಿತ್ತಿಗಳಲ್ಲಿ ಚಿತ್ರಿಸುತ್ತದೆ. ಇವು ಮೂರೂ ಭಾರತದ ಸಮಸ್ಯೆಗಳಾಗಿರುವಾಗಲೇ ಇಡೀ ವಿಶ್ವದ್ದೂ ಆಗಿರುವ ಕಹಿಸತ್ಯವನ್ನು ಮೂರು ಒಡೆಯುವ ರೂಪಕಗಳ ಮೂಲಕ ತಣ್ಣಗೆ ವಿವರಿಸುವ ವಿವರಣೆಯು ಇಂತಹ ಓದಿಗೆ ತೆರೆದುಕೊಳ್ಳದಿರುವವರೊಳಗೆ ಹೊಟ್ಟೆತೊಳಸು ಉಂಟು ಮಾಡಿದರೆ ಅನಿರೀಕ್ಷಿತವಲ್ಲ.
ರೂಪಾ-ಗುರುಪ್ರಸಾದ್ ಅನುಭವದ ಮೂಸೆಯಿಂದ ಮೂಡಿಬಂದ ಈ ಪುಸ್ತಕ ನಮ್ಮೆಲ್ಲರ ಬದುಕಿನ ಜೊತೆ ಹಾಸುಹೊಕ್ಕಿನಂತೆ ಬೆಸೆದುಕೊಂಡುಬಿಡುವುದೇ ಒಂದು ಸೋಜಿಗ. ಇಲ್ಲಿನ ಒಂದೇ ಒಂದು ಅನುಭವವೂ ನಮಗೆ ಸಂಬಂಧವಿಲ್ಲದ್ದು ಅನ್ನಿಸುವುದೇ ಇಲ್ಲ. ಇವರ ಈ ಚಿಂತನ-ಮಂಥನಕ್ಕೆ ಎರಡು-ಮೂರು ತಲೆಮಾರುಗಳಿಗೆ ಸಲ್ಲುವ ಅನುಭವದ ಸಾಮಗ್ರಿ ಇದೆ. ಬದುಕಲ್ಲಿ ಮುಂದೆ ಸಾಗಿ ಬಂದವರಿಗೆ ತಮ್ಮ ಜೀವನದಲ್ಲಿ ಗಲಿಬಿಲಿಗೊಂಡ, ಅರ್ಥವಾಗದೆ ನಿಸ್ಸಹಾಯಕರಾಗಿ ಪರದಾಡಿದ ಸನ್ನಿವೇಶಗಳೆಲ್ಲಾ ಕಣ್ಮುಂದೆ ಬಂದು, ‘ಅಯ್ಯೋ, ನನಗೂ ಇದೇ ಅನುಭವವಾಗಿತ್ತಲ್ಲ, ನನಗ್ಯಾಕೆ ಇದೆಲ್ಲಾ ಹೊಳೆಯಲಿಲ್ಲ’ ಎಂದು ನಿಡುಸುಯ್ಯುವಂತಾಗುತ್ತದೆ. ಇಂದಿನ ಯುವಜನರಿಗೆ, ‘ಅಯ್ಯೋ, ಏನೋ ಮಾಡಲು ಹೋಗಿ ಏನೋ ಮಾಡಿಬಿಡುತ್ತಿದ್ದೆನಲ್ಲ, ಸದ್ಯ ಪಾರಾದೆ’ ಎಂದು ನಿರಾಳವಾಗುವಂತಾಗುತ್ತದೆ. ಇನ್ನೂ ಮುಂದಡಿ ಇಡಬೇಕಾದ ಮಕ್ಕಳಿಗಂತೂ ಮುಂದೆ ದೀಪದ ಬೆಳಕೇ ಪ್ರಕಾಶಿಸುತ್ತದೆ. ‘ಜೀವನದಲ್ಲಿ ಅದ್ಭುತಗಳು ಸಂಭವಿಸುವುದಿಲ್ಲ, ಜೀವನವೇ ಒಂದು ಅದ್ಭುತ ಎಂದು ಸ್ವೀಕರಿಸಿದಾಗ ನಿಮ್ಮಂತೆ ನೀವಿರಿರುತ್ತೀರಿ. ನಿಮ್ಮಂತೆ ನೀವಿದ್ದಾಗ ಆನಂದದ ಸುಖಭೋಗ ನಿಮ್ಮ ಕೈನಿಲುಕಿನಲ್ಲೇ ಸುಳಿದಾಡುತ್ತಿರುತ್ತದೆ’. ರೂಪಾ-ಗುರುಪ್ರಸಾದರ ಸ್ನೇಹಮಯ ಬರವಣಿಗೆಯ ಶೈಲಿ ಪುಸ್ತಕವನ್ನು ಕೊನೆಯವರೆಗೂ ಬಿಡದೆ ಓದಿಸಿಕೊಳ್ಳುತ್ತದೆ. ಮಾತು ಹೆಚ್ಚಾದ ತಕ್ಷಣ ಕುತೂಹಲ ಕೆರಳಿಸುವ ಕತೆಯೊಂದನ್ನು ಎಳೆದು ತರುವ ರೀತಿಯಂತೂ ಇನ್ನೂ ಖುಷಿ ಕೊಡುತ್ತದೆ. ಹೀಗೆ ವಸ್ತು, ಭಾಷೆ, ಶೈಲಿ ಎಲ್ಲವೂ ಜನಮುಖಿಯಾಗಿರುವುದೇ ಈ ಪುಸ್ತಕದ ವೈಶಿಷ್ಟ್ಯ. ಈ ಪುಸ್ತಕವನ್ನು ಓದುತ್ತಾ ಅರಿವಿಗೆ ಬಾರದಂತೆಯೇ ಓದುಗರ ಒಳಗೊಂದು ಬದಲಾ
Author
Chandrashekar Madabhavi
Binding
Soft Bound
Number of Pages
188
Publication Year
2025
Publisher
Chanda Pusthaka
Height
2 CMS
Length
22 CMS
Weight
200 GMS
Width
14 CMS
Language
Kannada