Select Size
Quantity
Product Description
ಕವಿ ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಬುದ್ಧಚರಣ ಕಾವ್ಯ ಕುರಿತ ಲೇಖನಗಳ ಸಂಪುಟ ಇದು. ಹಿರಿಯ ವಿದ್ವಾಂಸರಾದ ಮಲ್ಲೇಪುರಂ ಜಿ ವೆಂಕಟೇಶ ಅವರು ಇದರ ಪ್ರಧಾನ ಸಂಪಾದಕರಾಗಿದ್ದು, ಮಾಲಿನಿ ಗುರುಪ್ರಸನ್ನ, ಸಿಂಧು ರಾವ್ ಟಿ ಸಂಪಾದಕರಾಗಿದ್ದಾರೆ. ವೆಂಕಟೇಶಮೂರ್ತಿ ಅವರ ಬುದ್ಧ ಚರಣ ಕಾವ್ಯದ ಕುರಿತು ಬೆನ್ನುಡಿಯಲ್ಲಿ ಬಿ.ಎ.ವಿವೇಕ ರೈ ಅವರು ಬರೆಯುತ್ತಾ, ಬುದ್ಧನನ್ನು ಪೂರ್ಣವಾಗಿ ದರ್ಶಿಸಲು ಸಾಧ್ಯವಾಯಿತು ಎಂದಿದ್ದಾರೆ. ಇಲ್ಲಿ ನಾವು ಓದುಗರಾಗಿ ಕೇವಲ ಕಾವ್ಯದ ಹೊರಗೆ ಉಳಿಯುವುದಿಲ್ಲ. ನಾವೆಲ್ಲ ಶ್ರವಣಭಿಕ್ಕುಗಳಾಗಿ ಬಿಡುತ್ತೇವೆ. ಬುದ್ಧಚರಣವು ಬುದ್ಧಮೀಮಾಂಸೆಯನ್ನು ಹೃದ್ಗತ ಮಾಡಿಸಿದ ಮಹಾಕಾವ್ಯ ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಕವಿ ವೆಂಕಟೇಶಮೂರ್ತಿಯವರ ನಿಡುಗಾಲದ ಕಾವ್ಯ ವಿಲಾಸವು ಒಂದು ಅಖಂಡ ತತ್ಪರ ಉಪಾಸನೆಯೇ ಆಗಿದೆ ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದ್ದಾರೆ
Weight
300 GMS
Width
20 CMS
Length
22 CMS
Publication Year
2022
Publisher
Ankitha Pusthaka
Number of Pages
216
Binding
Soft Bound
ISBN-13
9789392230271
Author
Prof Mallepuram G Venkatesh
Language
Kannada