Product Description
೧೯೮೫ರಲ್ಲಿ (ಮರಣೋತ್ತರವಾಗಿ) ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದಿದ ಶ್ರೀ ತ.ರಾ.ಸು. ಪ್ರಗತಿಶೀಲ ಪಂಥದ ಲೇಖಕರ ಪರಂಪರೆಯಲ್ಲಿ ಅ.ನ.ಕೃ. ಅವರ ಪ್ರಭಾವ ವಲಯದಲ್ಲಿ ರೂಪುಗೊಂಡ ಕನ್ನಡದ ಮಹತ್ವದ ಲೇಖಕರು. ಅವರ ಭಾಷಾ ಶೈಲಿಗಳ ಸಲಿಈಲತೆ, ಉಜ್ವಲತೆ, ಉತ್ಸಾಹ, ಭಾವ ನಿರ್ಭರತೆ ಮತ್ತು ಆಲಂಕಾರಿಕತೆಗಳಿಗೆ ಮಾರುಹೋಗದ ಓದುಗರಿಲ್ಲ. ಸಾಮಾಜಿಕ ಕಾದಂಬರಿಗಳ ರಚನೆಯಲ್ಲಿ ಸಾಕಷ್ಟು ಯಶಸ್ಸುಗಳಿಸಿದ್ದರೂ, ಐತಿಹಾಸಿಕ ಕಾದಂಬರಿಕಾರರಾಗಿ ಅವರು ಗಳಿಸಿದ ಯಶಸ್ಸು ಮತ್ತು ಜನಪ್ರಿಯತೆ ಅಸಾಧಾರಣವಾದುದು. ಚಿತ್ರದುರ್ಗದಿಂದ ತ.ರಾ.ಸು ಅವರೂ ತ.ರಾ.ಸು ಅವರಿಂದ ಚಿತ್ರದುರ್ಗವೂ ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿದೆ. ಕನ್ನಡಿಗರ ಹೃದಯದಲ್ಲಿ ಅವರು ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತ.ರಾ.ಸು. ಅವರ ಹೆಸರಿನೊಂದಿಗೆ ಅಭಿನ್ನವಾಗಿ ಬೆರೆತುಕೊಂಡುಬಿಟ್ಟಿರುವ ಹೆಸರಾಗಿರುವ ಶ್ರೀ ನಾ. ಪ್ರಭಾಕರ, ಈ ಪುಸ್ತಕದ ಲೇಖಕರು.