Product Description
೧೯೫೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಶಿವರಾಮ ಕಾರಂತರನ್ನು ಕನ್ನಡ ಸಾಹಿತ್ಯ ಲೋಕದ ವಿಸ್ಮಯ ಎಂದೇ ವರ್ಣಿಸಬೇಕಾಗುತ್ತದೆ. ಹಲವು ಹತ್ತು ಕ್ಷೇತ್ರಗಳಲ್ಲಿ ವಿಹರಿಸಿರುವ ದೈತ್ಯ ಪ್ರತಿಭೆ ಅವರದು. ಈ ದ್ಟೃಯಲ್ಲಿ ಜಗತ್ತಿನ ಯಾವ ಸಾಹಿತಿಯೂ ಕಾರಂತರನ್ನು ಸರಿಗಟ್ಟಲಾರ. ಸಮಾಜವನ್ನು ಅವರಂತೆ ಹಚ್ಚಿಕೊಂಡವರೂ ತುಂಬ ವಿರಳ. ಈ ಕಳಕಳಿಯೇ ಅವರನ್ನು ಹಲವು ಕ್ಷೇತ್ರಗಳತ್ತ ಕೊಂಡೊತು. ಈ ದಿಕ್ಕಿನಲ್ಲಿ ಅವರದು ಏಕಮೇವಾದ್ವಿತೀಯ ಸಾಹಸ, ಅಭೂತಪೂರ್ವ ವಿಕ್ರಮ. ಅವರ ಹಲವು ಕಾದಂಬರಿಗಳು ಯಾವುದೇ ಭಾಷೆಗೆ ಭೂಷಣಪ್ರಾಯವಾಗುವಂಥವು. ಯಕ್ಷಗಾನಕ್ಕೆ ಕಾಯಕಲ್ಪ ಮಾಡಿದ ಶ್ರೇಯಸ್ಸು ಕಾರಂತರಿಗೆ ಸಲ್ಲುತ್ತದೆ. ಕನ್ನಡದ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಹರಡಿದ ಕೀರ್ತಿಯೂ ಅವರದೇ. ದೇಶ-ವಿದೇಶಗಳ ಸಂಘ ಸಂಸ್ಥೆಗಳಿಂದ, ವಿಶ್ವವಿದ್ಯಾನಿಲಯಗಳಿಂದ ಅವರ ಹಾಗೆ ಸನ್ಮಾನಿತರಾಗಿರುವ ಸಾಹಿತಿಗಳೂ ತೀರಾ ವಿರಳವೇ. ಕಾರಂತರ ಸಾಹಿತ್ಯದ ಸಂರಕ್ಷಣೆ, ವರ್ಗೀಕರಣ, ವಿಶ್ಲೇಷಣೆ, ಸಂಪಾದನೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀಮತಿ ಮಾಲಿನಿ ಮಲ್ಯ ಈ ಪುಸ್ತಕದ ಲೇಖಕಿ.