Product Description
ಭಾಷಣಗಳು, ಚರ್ಚೆಗಳು ಮತ್ತು ಬರವಣಿಗೆಗಳ ಸ್ವರೂಪದಲ್ಲಿರುವ ಜೆ. ಕೃಷ್ಣಮೂರ್ತಿಯವರ ಸಾಹಿತ್ಯ ಸೃಷ್ಟಿ ತನ್ನ ಅಗಾಧತೆ ಮತ್ತು ವೈವಿಧ್ಯದ ದೃಷ್ಟಿಯಿಂದ ಗಮನಾರ್ಹವಾಗಿದೆ. 1980ರಲ್ಲಿ ಕೋರಿಕೆಯ ಮೇರೆಗೆ ತಮ್ಮ ಸಾಧನೆಯ ಬಗ್ಗೆ ಒಂದು ಪುಟದ ಸಾರಾಂಶ ಬರೆದುದಲ್ಲದೆ ಅದು ಬೋಧನೆಯ ‘ಸಾರ’ವೆಂದೂ ಬಣ್ಣಿಸಿದರು. ಈ ಸಂಕಲನವು ಈ ಸಾರಾಂಶದಿಂದ ಆರಂಭವಾಗಿ ಈ ಸಾರದ ಧ್ವನಿವರ್ಧಿಸುವ ಆಯ್ದ ವಾಕ್ಯವೃಂದಗಳೊಂದಿಗೆ ಮುಂದುವರಿಯುತ್ತದೆ. ಗ್ರಂಥದ ಸಂಪಾದಕರು ಕೃಷ್ಣಮೂರ್ತಿಯವರ ಬೋಧನೆಗಳ ಪ್ರಮುಖ ಅಂಶಗಳನ್ನು ಆಯ್ದುಕೊಂಡು ಈ ವಿಚಾರಗಳನ್ನು ವಿಸ್ತರಿಸುವ ವಿವರವಾದ ವಾಕ್ಯವೃಂದಗಳನ್ನು ಈ ಕೃತಿಯಲ್ಲಿ ಪೋಣಿಸಿದ್ದಾರೆ.
ಸತ್ಯವೆಂಬುದು ಹಾದಿಗಳಿಲ್ಲದ ನೆಲ
ಮನುಷ್ಯ ರಕ್ಷಣಾ ಬೇಲಿಗಳಂತಿರುವ
ಬಿಂಬಗಳನ್ನು ಸೃಷ್ಟಿಸಿಕೊಂಡಿದ್ದಾನೆ
ದೈನಂದಿನ ಆಯ್ಕೆರಹಿತ ಅರಿವಿನಲ್ಲಿ ಬಿಡುಗಡೆ
ಆಲೋಚನೆಯೇ ಕಾಲ
ಕಾಲವೇ ಮನುಷ್ಯನ ಮಾನಸಿಕ ಶತ್ರು
ಈ ಗ್ರಂಥವು ಕೃಷ್ಣಮೂರ್ತಿಯವರು ಭಾಷೆಯ ಬಳಕೆಯಲ್ಲಿ ಮಾಡಿಕೊಂಡಿರುವ ಆವಿಷ್ಕಾರಗಳು ಮತ್ತು ‘ಹಳೆಯ ಶಬ್ದಗಳಿಗೆ ಹೊಸ ವ್ಯಾಖ್ಯಾನ’ ನೀಡುವ ಅವರ ಕ್ರಮಗಳ ಬಗ್ಗೆ ಓದುಗರಲ್ಲಿ ಜಾಗೃತಿ ಮೂಡಿಸುತ್ತದೆ.