‘ಬದುಕು ಒಂದು ಸುಳಿಯ ಹಾಗೆ. ಎಚ್ಚರ ತಪ್ಪಿದರೂ ಜೀವನವನ್ನು ಒಪ್ಪಿಸಿ ಬಿಡಬೇಕಾಗುತ್ತೆ.’ ಇದೊಂದು ನೊಂದ ಹೆಣ್ಣಿನ ಪತ್ರದ ಕೊನೆಯ ಎರಡು ಸಾಲುಗಳು. ಇದನ್ನು ಹೇಗೆ ಅರ್ಥೈಸುವುದು? “ಹೊರಗಡೆ ಮೂವ್ ಆಗುವ ಗಂಡಿನ ಜೀವನದಲ್ಲಿ ಅಭಿಮನಿಸುವ, ಆರಾಧಿಸುವ ಹೆಣ್ಣುಗಳ ಪ್ರವೇಶವಾಗಬಹುದು. ಅಂಥ ಸಂದರ್ಭಗಳಲ್ಲಿ ಜ್ಯೋತಿ ಅಂಥ ಹೆಣ್ಣುಗಳ ದಹನವಾಗಿ ಹೋಗುತ್ತೆ. ಪರೋಕ್ಷವಾಗಿಯಾದ್ರೂ ನೀವು ಜ್ಯೋತಿಯ ಸಾವಿಗೆ ಕಾರಣರು” ಡೈರಿ ಹಿಂದಿರುಗಿಸಿದ ನಾರಾಯಣ್ ಮಾತುಗಳು. ಚಿತ್ರಾಳ ಪಾಲಿಗೆ ಸುದರ್ಶನ್ ‘ಬಾಂದಳದ ನಕ್ಷತ್ರ.’