Quantity
Product Description
ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದೆ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಿಗಂತೂ ವಸುಮತಿಯವರ ಕಥೆಗಳೆಂದರೆ ಪಂಚಪ್ರಾಣ.
ಮಲೆನಾಡಿನ ಪರಿಸರ , ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ' ಬಂದನಾ ಹುಲಿರಾಯ', 'ಅಗ್ನಿದಿವ್ಯ', 'ಮೃಗತೃಷ್ಣಾ', ಪಾತಾಳ ಗರಡಿ; ' ನಮ್ಮ ನಡುವಿನ ಕಾಂತಾಮಣಿಯರು', 'ಅಂತರಂಗದ ಪಿಸುನುಡಿ', ' ಸಂಕ್ರಮಣ' ಇವರ ಪ್ರಮುಖ ಕಥಾ ಸಂಕಲನಗಳು. ಕತೆಗಳಂತೆಯೇ 'ಮನ್ವಂತರ ' ' ನಾನು ನೀವಾಗಿರಬಹುದು ,ಸಂಧಿಕಾಲ'' ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.
ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ.
Weight
250 GMS
Height
10 CMS
Width
1 CMS
Length
10 CMS
Binding
Soft Bound
Publication Year
2009
Number of Pages
176
Publisher
Ankitha Pusthaka
Author
Vasumathi Udupa
Language
Kannada