Product Description
೧೯೯೭ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿರುವ ಡಾ. ಎಂ. ಚಿದಾನಂದ ಮೂರ್ತಿ ಅವರು ಮೂಲತಃ ಕನ್ನಡ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಿಗೆ ತಮ್ಮನ್ನು ಮೀಸಲಾಗಿರಿಸಿಕೊಂಡಿರುವಂಥವರು. ತೀವ್ರವಾದ ತಮ್ಮ ಕನ್ನಡ ಪರ ಕಾಳಜಿಗಳಿಂದಾಗಿ ಕನ್ನಡ ಪ್ರಾಧ್ಯಾಪಕರಲ್ಲಿಯೇ ವಿರಳರೂ, ವಿಶಿಷ್ಟರೂ ಆದವರು. ಛಂದಸ್ಸು, ಗ್ರಂಥ ಸಂಪಾದನೆ, ಶಾಸನ, ಸಂಸ್ಕೃತಿ, ಸಾಹಿತ್ಯ ಚರಿತ್ರೆ, ಭಾಷಾ ವಿಜ್ಞಾನ, ಜಾನಪದ - ಇಂಥ ಹಲವು ಕ್ಷೇತ್ರಗಳಲ್ಲಿ ಪದಚಿಹ್ನೆಗಳನ್ನು ಊರಿರುವಂಥ, ಮಹತ್ವದ ಗ್ರಂಥಗಳನ್ನು ರಚಿಸಿರುವ ಅವರು ಪ್ರಶಸ್ತಿಗಳಿಗೇ ಗೌರವವನ್ನು ತಂದುಕೊಟ್ಟಿರುವಂಥ ಅಪೂರ್ವ ವಿದ್ವಾಂಸರು. ಗುಲಬರ್ಗಾ ವಿಶ್ವವಿದ್ಯಾನಿಲಯದ ಭಾಷಾವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಸಂಗಮೇಶ ಸವದತ್ತಿಮಠ ಈ ಪುಸ್ತಕದ ಲೇಖಕರು.