Product Description
ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವಶಾಲಿ ಭಾರತೀಯ ಎನಿಸಿಕೊಂಡಿರುವ ಮಹಾತ್ಮಾ ಗಾಂಧಿ ಅವರ ಛಾಯೆ ಮರಣಹೊಂದಿದ ಅರವತ್ತು ವರ್ಷಗಳ ತರುವಾಯ ಕೂಡಾ ದೇಶದ ಮೇಲೆ ದೊಡ್ಡದಾಗಿ ವಿಸ್ತಾರಗೊಳ್ಳುತ್ತಿದೆ. ಬ್ರಿಟಿಷರ ಆಳ್ವಿಕೆಯ ನೊಗದಿಂದ ಭಾರತ ವಿಮೋಚನೆಗೊಳ್ಳಬೇಕಲ್ಲದೇ ದಾರಿದ್ರ್ಯ, ನಿರಕ್ಷರತೆ ಮತ್ತು ಅಸ್ಪೃಶ್ಯತೆಯಂತಹ ಅನಿಷ್ಟಗಳಿಂದ ಕೂಡಾ ಬಿಡುಗಡೆ ಪಡೆಯಬೇಕೆಂದು ಅವರು ಕನಸು ಕಂಡಿದ್ದರಲ್ಲದೇ ಹೋರಾಡಿದ್ದರು. ಭಾರತದ ಎಲ್ಲ ಪ್ರಜೆಗಳು ಸ್ವಾತಂತ್ರ್ಯ ಮತ್ತು ಸಮೃದ್ಧಿಯ ಫಲಗಲನ್ನು ಸಮಾನವಾಗಿ ಅನುಭವಿಸಬೇಕೆಂದು ಅವರು ಆಶಿಸಿದ್ದರು. ಅವರ ಅನೇಕ ಕ್ರಾಂತಿಕಾರಿ ವಿಚಾರಗಳು ಆ ದಿನಗಳಲ್ಲಿ ವೈಶಿಷ್ಟ್ಯಗಳು ಎಂದು ಭಾವಿಸಲಾಗಿದ್ದು ಇಂದಿನ ತಲೆಮಾರು ಅವನ್ನು ಸಾಂಪ್ರದಾಯಿಕ ಕಲ್ಪನೆಗಳೆಂದು ಭಾವಿಸಿ ಅನುಸರಿಸುತ್ತಿವೆ. ‘ಗಾಂಧಿಗಿರಿ’ಯ ಪುನರುಜ್ಜೀವಿತ ಜನಪ್ರಿಯತೆಯು ಇಪ್ಪತ್ತೊಂದನೇ ಶತಮಾನದಲ್ಲಿ ತಗ್ಗದೇ ಮುಂದುವರಿಯುತ್ತಿರುವ ಗಾಂಧಿ ಅವರ ಪ್ರಸ್ತುತತೆಗೆ ಸಾಕ್ಷಿಯಾಗಿದೆ.
ಈ ಕೃತಿಯು ಗಾಂಧಿ ಅವರ ಮನೋಭಾವ ಮತ್ತು ವಿಚಾರಗಳು ಮತ್ತು ಮೈನವಿರೇಳಿಸುವಂತಹ ಹಾಗೂ ಸಮೃದ್ಧ ನವ ಭಾರತ ಕುರಿತ ಅವರ ಕನಸಿನೊಳಕ್ಕೆ ಮರುಳುಗೊಳಿಸುವಂತಹ ಇಣುಕು ನೋಟ ಬೀರುವ ಅವಕಾಶವನ್ನು ಒದಗಿಸಿಕೊಡುತ್ತದೆ.