Product Description
ಪುಸ್ತಕದ ಶೀರ್ಷಿಕೆ ನೋಡಿ ಭೋಜನಪ್ರಿಯರು ಗಾಬರಿಪಡಬೇಕಾದ ಅಗತ್ಯವಿಲ್ಲ. ಪಥ್ಯ ಅವಶ್ಯಕ ಭಾಗವಾಗಿ ಇಲ್ಲಿ ಸೇರಿದೆ ಅಷ್ಟೆ. ಇಲ್ಲಿನ ಅಡಿಗೆಗಳು ರುಚಿಗೆ ಯಾವ ರೀತಿಯಲ್ಲೂ ಬಾಧಕವಾಗಿಲ್ಲ. ಮನೆಯಲ್ಲಿ ಬಳಕೆಯಲ್ಲಿರುವ ಅಳತೆಗಳನ್ನು ಕೊಟ್ಟು ಇಷ್ಟು ಪದಾರ್ಥಗಳನ್ನು ಹಾಕಿ ಅಡಿಗೆ ಮಾಡಿದರೆ ಈ ಪ್ರಮಾಣದ ಇಂತಿಂತಹ ಅಂಶಗಳು ದೊರಕುತ್ತವೆ ಎಂಬ ವಿವರಗಳು ಗೃಹಿಣಿಯರಿಗೆ ತುಂಬಾ ಉಪಯುಕ್ತ. ಅಂತೆಯೇ ಪಥ್ಯವಿರಿಸಲ್ಪಟ್ಟ ರೋಗಿಗೆ ಆಹಾರದ ಜ್ಞಾನವು ಇದ್ದರೆ, ಪಥ್ಯ ಮಾಡುವುದು ಸುಲಭ. ತುಸು ಉತ್ಸಾಹದಿಂದ ಪಥ್ಯ ಇರಬಹುದು. ಆಗ ಪಥ್ಯ ಉಪದ್ರವವಾಗುವುದಿಲ್ಲ, ಸಹ್ಯವಾಗುತ್ತದೆ; ಅನುಸರಿಸಬಹುದಾದ ಸರಳ ಅಭ್ಯಾಸವೂ ಆಗುತ್ತದೆ. ಶರೀರದ ರೋಗಕ್ಕೆ ಔಷಧ ನೀಡುತ್ತಿದ್ದ ಡಾ.ಎಂ. ಶಿವರಾಮ್, ಕನ್ನಡ ಓದುಗರಿಗೆ ರಾ.ಶಿ. ಎಂಬ ಹೆಸರಿನಿಂದ ಪರಿಚಿತರು. ತಮ್ಮ ತಿಳಿನಗೆಯ ‘ಕೊರವಂಜಿ’ಯ ಮೂಲಕ ಕನ್ನಡಿಗರ ಮನಸ್ಸಿಗೂ ಮದ್ದು ನೀಡುತ್ತಿದ್ದರು. ತಮ್ಮ ಮಗಳಾದ ಶ್ರೀಮತಿ ವಿಮಲಾ ಶೇಷಾದ್ರಿ ಜೊತೆಗೆ ರಚಿಸಿದ ಕೃತಿ ಇದು.