Product Description
ದಲಿತ ಸಂವೇದನೆಗಳನ್ನು ರಾಜಕೀಯ ವಿದ್ಯಮಾನಗಳನ್ನು ಒಳಗೊಂಡ ಈ ಕಾದಂಬರಿಯಲ್ಲಿ ಮೇಲುವರ್ಗ ಹಾಗೂ ಕೆಳವರ್ಗದ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷದ ವಿವಿಧ ಮಗ್ಗುಲುಗಳೂ ಮಾನವೀಯ ಮುಖಗಳೂ ಅನಾವರಣಗೊಂಡಿವೆ. ವ್ಯಕ್ತಿ ಮತ್ತು ವ್ಯವಸ್ಥೆಯ ಸಂಘರ್ಷ ಕಾದಂಬರಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ವರ್ಣ ಸಂಘರ್ಷವನ್ನು ಮುಖ್ಯವಸ್ತುವಾಗಿಸಿಕೊಂಡು ಅಸ್ಪೃಶ್ಯ ಸಮುದಾಯದ ತವಕ ತಲ್ಲಣಗಳನ್ನು ರಾಜಕೀಯ ನೆಲೆಯಲ್ಲಿ ಅನಾವರಣಗೊಳಿಸುವ ಇಲ್ಲಿನ ಅನುಭವಗಳು ಮತ್ತು ಸನ್ನಿವೇಶಗಳು ನಮ್ಮ ಸುತ್ತಮುತ್ತಲಿನ ರಾಜಕೀಯ ಹಾಗೂ ಸಾಮಾಜಿಕ ವಿದ್ಯಮಾನಗಳು ಕಠೋರ ಸತ್ಯಗಳನ್ನು ದಾಖಲಿಸುತ್ತವೆ. ಅಮಾಯಕ ಜನರ ಬಲಿದಾನ, ಪುರೋಹಿತಶಾಹೀ ಮೇಲುವರ್ಗದ, ಪಟ್ಟಭದ್ರಹಿತಾಸಕ್ತಿ ಅಧಿಕಾರಿಗಳ ಹಾಗೂ ರಾಜಕೀಯ ಪುಡಾರಿಗಳ ದೊಂಬರಾಟ, ದ್ವಂದ್ವ ನೀತಿ, ಸಮಯಸಾಧಕನ, ಸ್ವಾರ್ಥ ಮನಸುಗಳನ್ನು ಕಣ್ಣಿಗೆ ರಾಚುವಂತೆ ನಿರೂಪಿಸುವುದರೊಂದಿಗೆ ಕ್ರಾಂತಿಯ ಹೊರಳು ದಾರಿಯಲ್ಲಿ ತಮ್ಮ ಹಕ್ಕುಬಾಧ್ಯತೆಗಳಿಗಾಗಿ ಗಟ್ಟಿಯಾದ ಭೂಮಿಯನ್ನು ಸಿದ್ಧಗೊಳಿಸುತ್ತ ಬದುಕನ್ನು ಹೊಸರೀತಿಯಲ್ಲಿ ಹೊಸ ಅರ್ಥದಲ್ಲಿ ಪರಿಭಾವಿಸಲು ಹಂಬಲಿಸುವ ಸಮಾಜಕ್ಕೆ ದಿಕ್ಸೂಚಿಯಾಗಬಲ್ಲ ಸುಧಾರಿತ ಮನಸ್ಸುಗಳನ್ನೂ ಈ ಕೃತಿ ಕಟ್ಟಿಕೊಡುತ್ತದೆ.
(ಅನುವಾದಕರ ಅನಿಸಿಕೆಯಿಂದ )