Product Description
೧೯೭೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಎ.ಎನ್. ಮೂರ್ತಿರಾವ್ ಅವರು ಎರಡು ಶತಮಾನಗಳನ್ನು ಕಂಡಿರುವ ಮಹಾವ್ಯಕ್ತಿ ಮತ್ತು ಹಿರಿಯ ಸಾಹಿತಿ; ಪರಿಪಕ್ವ ಮನಸ್ಸಿನ, ಸುಸಂಸ್ಕೃತ ಅಭಿರುಚಿಯ, ಉದಾರ ಹೃದಯದ, ಆಳವಾದ ಪಾಂಡಿತ್ಯದ, ಆತ್ಮಾವಲೋಕನ ಪ್ರವೃತ್ತಿಯ, ಉದಾರ ಸಂಸ್ಕೃತಿಯ, ಪುರೋಗಾಮಿ ನಿಲುವಿನ, ಕಲಾತ್ಮಕ ದ್ಟೃಯ ಹಾಗೂ ಧ್ಯೇಯ ನಿಷ್ಠೆಯ - ಒಟ್ಟಿನಲ್ಲಿ "ಮಾನವ ಚೇತನದ ವಿಕಾಸದ ಹಾದಿಯಲ್ಲಿ ಒಂದು ಮೈಲಿಗಲ್ಲು" ಎಮಬ ಕೀರ್ತಿಗೆ ಪಾತ್ರರಾಗಿರುವಂಥ ಋ ಸದೃಶ ಚೇತನ. ಕನ್ನಡ ಗದ್ಯ ನಿರ್ಮಾಪಕರಲ್ಲಿ ಒಬ್ಬರಾಗಿರುವ ಅವರು ವ್ಯಕ್ತಿಯಾಗಿ ದೊಡ್ಡವರಾಗಿರುವಂತೆ, ಸಾಹಿತಿಯಾಗಿಯೂ ದೊಡ್ಡವರಾಗಿದ್ದಾರೆ. ಆಚಾರ್ಯ ಬಿ.ಎಂ.ಶ್ರೀ. ಅವರ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಬಂದಿರುವ ಅವರು ಬದುಕು-ಬರೆಹಗಳೆರಡರಲ್ಲಿಯೂ ಅತ್ಯುನ್ನತ ಧ್ಯೇಯ-ಆದರ್ಶಗಳ ಪ್ರತೀಕವಾಗಿರುವಂಥವರು. ಪ್ರೊ|| ಮೂರ್ತಿರಾವ್ ಕುರಿತ ಸಂಶೋಧನಾ ಲೇಖನಕ್ಕೆ ಪಿಎಚ್.ಡಿ. ಪದವಿ ಪಡೆದ ಡಾ. ಶಾಂತಾರಾಮ ಪ್ರಭು ಈ ಪುಸ್ತಕದ ಲೇಖಕರು.